Monday 27 April 2015

ಕಾವ್ಯ ಮತ್ತು ಕ್ರಾಂತಿ

                                                                                                                               •    ಬಾನು ಮುಶ್ತಾಕ್
   ಕಾವ್ಯ  ಎಂಬುದು ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಧಾರ್ಮಿಕ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾವ್ಯವು  ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ. ಮೌಖಿಕ ಪರಂಪರೆಯ ಭಾಗವಾಗಿ ಧಾರ್ಮಿಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ತಲೆತಲಾಂತರದಿಂದ ಅಸ್ತಿತ್ವ ಕಂಡುಕೊಂಡ ಕಾವ್ಯವು ಬರಹದ ಮೂಲಕ ತನ್ನ ಗುರುತನ್ನು ಇನ್ನಷ್ಟು ಸಶಕ್ತವಾಗಿ ಮೂಡಿಸಿದೆ.
    ನಾವು ಹಾಡುತ್ತೇವೆ . ..  . ಆದರೆ ಎಂತಹ ಹಾಡುಗಳನ್ನು  ? ಸಂತೋಷದ ಮದುವೆ, ಮುಂಜಿ, ಹುಟ್ಟು ಪ್ರೇಮದ ಕಾವ್ಯಗಳು ಮನುಷ್ಯನ ಭಾವಗಳಿಗೆ ಅನುಸಾರವಾಗಿ ಅಭಿವ್ಯಕ್ತಿಗೊಂಡು ಅಜರಾಮವಾಗಿವೆ. ಹಾಗೆಯೆ ವಿಫಲ ಪ್ರೇಮದ ವಿಷಾದ ಗೀತೆಗಳು , ಮUಳÀನ್ನು ಬೀಳ್ಕೊಡುವಾÀಗಿನ ದುಃಖ ಗೀತೆಗಳು, ತವರಿನ ವ್ಯಾಮೋಹದ ಮೋಹಕ ಸಾಲುಗಳು, ಸಾವಿನ ದುರಂತ , ವಿರಹ ವೇದನೆಯ ಆರ್ತತೆ    ಯನ್ನು ವ್ಯಕ್ತಪಡಿಸುವ ಶೋಕ ಗೀತೆಗಳು  ಇವೆಲ್ಲವೂ ನಮ್ಮ ಪರಂಪರೆಯ ಅವಿüಭಾಜ್ಯ ಅಂಗವಾಗಿವೆ. ಮನುಷ್ಯ ಜೀವಿಯ ಎಲ್ಲಾ ಭಾವಗಳು ಮತ್ತು ಎಲ್ಲಾ ಸನ್ನಿವೇಶಗಳಿಗೆ ಸಂವಾದಿಯಾಗುವ ಹಾಡುಗಳು. ಅರ್ಥಾತ್ ಭಾವಕ್ಕೆ ಅನುಗುಣವಾದ ಕಾವ್ಯವು ನಮ್ಮ ಸಂಪ್ರದಾಯವಾಗಿದೆ. ಕ್ರಮೇಣ ರಾಗ , ತಾಳ , ಲಯ ಛಂದಸ್ಸಿನ ಆಭರಣಗಳಿಂದ ಮುಕ್ತಗೊಂಡ ಕಾವ್ಯವು ತನ್ನ ನೆಲೆಗಳನ್ನು ವಿಸ್ತರಿಸತೊಡಗಿತು. ವೈಯಕ್ತಿಕತೆಗಳನ್ನು ಮೀರಿ ಸಾಮಾಜಿಕ ಸಂದರ್ಭಗಳಿಗೆ ದನಿಯನ್ನು ಒದಗಿಸಿತು.
    ಚಳುವಳಿಗಳು ಹಾಗೂ ಜಗತ್ತಿನ ಕ್ರಾಂತಿಗಳಿಗೆ ಪೂರಕವಾಗಿ ಕಾವ್ಯವೆಂಬುದು ವಿಭಿನ್ನ ಗಂಟಲಿನ ಅಭಿವ್ಯಕ್ತಿಯಾಯಿತು. ಗಡಿಗಳನ್ನು ಮೀರಿದ ಕಾವ್ಯ ಎಲ್ಲಾ ಬಂಧನಗಳ ಸರಪಳಿಗಳನ್ನು ತುಂಡರಿಸುವ ಸಾಧನವಾಯಿತು. ಹಾಗೂ ಕ್ರಾಂತಿಯ ರಣಕಹಳೆಗೆ ದನಿಗಳನ್ನು ಒದಗಿಸಿತು. ಅಷ್ಟೆ ಅಲ್ಲದೆ ಪ್ರಭುತ್ವದ ಸವಾಲುಗಳಿಗೆ ಎದೆಯೊಡ್ಡುವ ಸ್ಪಷ್ಟತೆ ಮತ್ತು ತಾತ್ವಿಕತೆ ಕಾವ್ಯದ ಶಕ್ತಿಯಾಗಿದೆ. ಹೀಗೊಂದು ಸಂದರ್ಭ . .. . ಸಮಕಾಲೀನ ಇರಾನ್ ದೇಶದ ಸಾಮಾಜಿಕ ಸಂದರ್ಭವನ್ನು ಗಮನಿಸಿಬಹುದು. ಸೈಯದ್ ಹುಸೇನ್ ಮೌಸಮಿ ಎಡ ಪಂಥೀಯ ಚಿಂತಕ , ಕವಿ ಮತ್ತು ವಾತು ಶಿಲ್ಪಿ . ಅಧಿಕಾರದ ಹಾವು-ಏಣಿಯಾಟದಲ್ಲಿ ಇರಾನಿನ ಪ್ರಧಾನ ಮಂತ್ರಿಯಾಗಿದ್ದ ಆತನನ್ನು ಬಲಪಂಥೀಯ ಗುಂಪು ಉದ್ದೇಶ ಪೂರ್ವಕವಾಗಿ ಮೂಲೆ ಗುಂಪು ಮಾಡಿತು. ಆತ ಇಪ್ಪತ್ತು ವರ್ಷಗಳ ಕಾಲ ರಾಜಕೀಯವಾಗಿ ಅಜ್ಞಾತÀವಾಸವನ್ನು ಅನುಭವಿಸಿದ. ಆದರೆ ಆ ಎರಡು ದಶಕಗಳ ಅವಧಿ ಆತನ ಸಾಲಿಗೆ ಸೃಜನ ಶೀಲ ಪರ್ವವಾಗಿತ್ತು. ಆತ ಆ ಕಾಲವನ್ನು ವಾಸ್ತು ಶಿಲ್ಪಿಯಾಗಿ ಮತ್ತು ಕವಿಯಾಗಿ ತನ್ನನ್ನು  ತೊಡಗಿಸಿಕೊಂಡ .  ಆ ನಂತರ ರಾಜಕೀಯ ಪಲ್ಲಟಗಳ ಕ್ಷೋಭೆಯಲ್ಲಿ ಆತ ಇರಾನಿನ ಜನತೆಯ ಒತ್ತಾಸೆಗೆ ಮಣಿದು 2009ನೇ ಇಸವಿಯಲ್ಲಿ ಇರಾನಿನ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ .ಚುನಾವಣೆಯಲ್ಲಿ ವ್ಯಾಪಕವಾದ ಅಕ್ರಮ ನಡೆಯಿತು ಹಾಗೂ ಮೌಸಮಿ ಅಧ್ಯಕ್ಷಿಯ ಚುನಾವಣೆಯಲ್ಲಿ  ಸೋಲನ್ನು ಅನುಭವಿಸಿದ. ಆದರೆ ಇರಾನಿನ ಜನತೆ ಆತನ ಸೋಲನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಜನತೆ ರಸ್ತೆಗೆ ಇಳಿಯಿತು. ಪ್ರತಿಭಟನೆ ಮುಖ್ಯ ಉದ್ದೇಶವಾಯಿತು. ಜೀವನದ ಹಂಗುತೊರೆದ ಜನತೆ ಪ್ರಭುತ್ವದ ವಿರುದ್ಧ ಸೆಟೆದು ನಿಂತಿತು. ಪ್ರಭುತ್ವವು ಮೌಸವಿಗೆ ಮರಣ ದಂಡನೆ ವಿಧಿಸಿತು. ಆಗ ಅವನ ಬೆಂಬಲಿಗರಾದ ಅಪಾರ ಸಂಖ್ಯೆಯ ಕ್ರಾಂತಿಕಾರಿ ಮಹಿಳೆಯರು ತಮ್ಮ ಮನೆಗಳ ಟೆರೆಸೀನ ಮೇಲೆ ಹÀತ್ತಿ ದೃಢವಾಗಿ ನಿಂತರು ಮತ್ತು ತಮ್ಮ ದನಿಗೆ ಪ್ರತಿಭಟನೆಯ ನೈತಿಕ ದೃಢತೆಯ ,ಸ್ವಾಭಿಮಾನದ, ತಾತ್ವಿಕತೆಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯನ್ನು ತುಂಬಿದರು. ಮತ್ತು ಕ್ರಾಂತಿಯ ಕವನಗಳನ್ನು ನಿರಂತರವಾಗಿ ಹಾಡಿದರು. ರಸ್ತೆಗಳಲ್ಲಿ  ದಿಗ್ಬಂಧನ , ರಕ್ತಪಾತ ಮತ್ತು “`ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಮೊಳಗುತ್ತಿತ್ತು. ಅಪಾರ ಭಯ, ಸಾವು ನೋವು ಮತ್ತು ಮಿಲಿಟರಿಯ ದೌರ್ಜನ್ಯದ ನಡುವೆ ಟೆರೇಸ್ ಮೇಲಿನಿಂದ ಕ್ರಾಂತಿಕಾರಿ ಮಹಿಳೆಯರ ಕಾವ್ಯ ಗುಡುಗುತ್ತಿತ್ತು.
ತೋಳಗಳೇ , ತಿಳಿದುಕೊಳ್ಳಿ
ತಂದೆ ಸತ್ತರೆ ನಮ್ಮ ಬುಡಕಟ್ಟಿನಲ್ಲಿ
ಅವನ ಬಂದೂಕು ಉಳಿಯುತ್ತದೆ.
 ಆ ಗುಂಪಿನ ಎಲ್ಲಾ ಗಂಡಸರು ಸತ್ತರೂ
ಮರದ ತೊಟ್ಟಿಲಿನಲ್ಲಿ ಚಿಗುರು ಅರಳುತ್ತಿರುತ್ತದೆ.       
    ಸಾಂಸ್ಕøತಿಕ ರಾಜಕಾರಣದ ಹುನ್ನಾರಗಳನ್ನು ಬಹಿರಂಗಪಡಿಸುವ ಹಾಗೂ ಪರಂಪರೆ ಮತ್ತು ಸಮಕಾಲೀನತೆಗೆ ಸ್ಪಂದಿಸುವ ಧ್ವನಿಗಳು, ನೋವು ಮತ್ತು ಆಕ್ರೋಶಗಳ ದ್ರವ್ಯವನ್ನು ಉರುವಲಾಗಿ ಬಳಸಿ ಎದೆತಟ್ಟಿ ಮೊಳಗುತ್ತಿದ್ದವು. ಖಾಸಗಿತನ ಮತ್ತು ಸಾರ್ವಜನಿಕತೆಯು ಪರಸ್ಪರ ನಂಬಿಕೆ, ಮೌಲ್ಯಗಳು , ಬದುಕಿನ ಭದ್ರತೆ ಹಾಗೂ ಬಾಂಧವ್ಯಗಳು ಹುಡಿಯಾಗಿ ಮಣ್ಣುಗೂಡುತ್ತಿದ್ದ ಅತಂತ್ರಸ್ಥಿತಿಯಲ್ಲಿಯೂ ತನ್ನ ಭಾವೋತ್ಕರ್ಷವನ್ನು ಯಶಸ್ವಿಯಾಗಿ ಸಂವಹನಗೊಳಿಸಿದ ಹಾಗೂ ಪ್ರಭುತ್ವದ  ಕ್ರೌರ್ಯದ ರಕ್ತಸಿಕ್ತ ಗೆರೆಗಳನ್ನು ಬಯಲಿಗೆಳೆದ ಇರಾನಿ ಮಹಿಳೆ ಗಾಢವಿಷಾದದ ನಡುವೆಯೂ ತಣ್ಣಗಿನ ದನಿಯನ್ನು ಉಳಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾದ ಅಸೀಮ ಸೃಜನಶೀಲ ಕ್ರಿಯೆಯಾಗಿದೆ. ಸಾವು ಮುಖಾಮುಖಿಯಾದಾಗಲೂ  ತನ್ನ ಅನಿವಾರ್ಯ ರಾಜಕೀಯ ಪ್ರಜ್ಞೆಯನ್ನು  ಉಳಿಸಿಕೊಂಡದ್ದು ಮತ್ತು ಕಾವ್ಯದ ಅಭಿವ್ಯಕ್ತಿಯ ಹೊಸ ಸಾಧ್ಯತೆಯಾಗಿ ಪ್ರಭುತ್ವದ ವಿರುದ್ಧ ಜೀವದ ಹಂಗು ತೊರೆದು ಹೋರಾಡುವ ಸಂದರ್ಭವಾಗಿ ಟೆರೇಸ್ ಕಾವ್ಯ ವಿಶ್ವದ ಸಾಹಿತಿಕ ಚರಿತ್ರೆಯಲ್ಲಿ ತನ್ನ ಐತಿಹಾಸಿಕ ಹೆಜ್ಜೆಗಳನ್ನು ಮೂಡಿಸಿತು. ಕ್ರಾಂತಿಯ ಸೆಲೆಯನ್ನು ಹಿಡಿದಿಟ್ಟುಕೊಳ್ಳುವ ಸಂದರ್ಭದ ತಲ್ಲಣಗಳನ್ನು ಇರಾನಿ ಮಹಿಳೆ ಸಶಕ್ತವಾಗಿ ಹೀಗೆ ಅಭಿವ್ಯಕ್ತಿಗೊಳಿಸಿದ್ದಾಳೆ.
    ನಮ್ಮ ರಕ್ತವನ್ನು ಹರಿಸಲು ನಮ್ಮ
 ಗಂಟಲು ಹರಿಯಲು ನಮ್ಮನ್ನು ಯಾಕೆ
 ಆಹ್ವಾನಿಸಿದಿರಿ ಸಂಭsÀ್ರಮದ ಪಾರ್ಟಿಗೆ
    ಹೀಗೆ ಎಲ್ಲಾ ನೋವು ಹಿಂಸೆ ಮತ್ತು ಯಾತನೆಯನ್ನು ತನ್ನ ಕಾವ್ಯದ ವಸ್ತು ವಿಷಯವಾಗಿ ಶೋಧನೆ ಮಾಡಲು ಆಕೆ ಉತ್ಸುಕಳಾಗಿದ್ದಾಳೆ. ಮತ್ತು ಯಾವ ಮುಲಾಜು ಕೂಡ ಇಲ್ಲದೆ , ಆಕೆ ಪ್ರಭುತ್ವಕ್ಕೆ ಸವಾಲನ್ನೆಸೆಯುತ್ತಾಳೆ ಹಾಗೂ ಕ್ರಾಂತಿಯ ಸಾಧ್ಯತೆಯನ್ನು ನಿರ್ಮಮಕಾರದಿಂದ ನೋಡುವ ಅಜಾÐತ ಕವಯತ್ರಿಯು ಬಿಸಿಲು ಬೆಳದಿಂಗಳನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಸ್ಥಿತಿಗೆ ತಲುಪಿದ್ದು , ಹೀಗೆಂದು ತನ್ನ ಟೆರೇಸಿನ ಮೇಲಿನಿಂದ ಹಾಡುತ್ತಾಳೆ ;
ನನಗೆ ಮಾಯದ ಗಾಯ ಬೇಕು
ಆ ಗಾಯವು ಚೀರಾಡ ಬೇಕು
ನಮ್ಮೆಲ್ಲರ ನಿದ್ದೆ ಕಸಿಯ ಬೇಕು
ವ್ರಣವಾಗಿ ಕಾಡಬೇಕು
      ಇನ್ನೂ ಕೆಲವು ಮಹಿಳೆಯರು ತಮ್ಮ ಗಾಢ ವಿಷಾದದ ನಡುವೆಯೂ ಉಳಿಸಿಕೊಂಡ ಅಪಾರ ಆಶಾವಾದವನ್ನು , ಮತ್ತು ಮುಂಬರುವ ದಿನಗಳಲ್ಲಿ ತನಗೆ ದಕ್ಕಬೇಕಾದ ಪಾಲನ್ನು ನಿರ್ವಂಚನೆಯಿಂದ ಪಡೆದುಕೊಳ್ಳಲು ಮಾನಸಿಕವಾಗಿ ಹೀಗೆ ತಯಾರಾಗಿದ್ದಾಳೆ
ನಮಗೆ ಮಳೆಯಲ್ಲಿ ನೆನೆಯಬೇಕಿದೆ
ಆ ಹನಿಗಳಲ್ಲಿ ನಮ್ಮ ಕಣ್ಣಿನ ಕಿಸರು
ಹರಿದುಹೋಗಬೇಕಿದೆ . ಇಡೀ ಜಗತ್ತನ್ನು
ವಿಭಿನ್ನ ನೋಟದಿಂದ ನೋಡ ಬೇಕಿದೆ
                     ***********


No comments:

Post a Comment