Showing posts with label ಲೇಖನ. Show all posts
Showing posts with label ಲೇಖನ. Show all posts

Monday, 27 April 2015

ಕಾವ್ಯ ಮತ್ತು ಕ್ರಾಂತಿ

                                                                                                                               •    ಬಾನು ಮುಶ್ತಾಕ್
   ಕಾವ್ಯ  ಎಂಬುದು ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಧಾರ್ಮಿಕ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾವ್ಯವು  ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ. ಮೌಖಿಕ ಪರಂಪರೆಯ ಭಾಗವಾಗಿ ಧಾರ್ಮಿಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ತಲೆತಲಾಂತರದಿಂದ ಅಸ್ತಿತ್ವ ಕಂಡುಕೊಂಡ ಕಾವ್ಯವು ಬರಹದ ಮೂಲಕ ತನ್ನ ಗುರುತನ್ನು ಇನ್ನಷ್ಟು ಸಶಕ್ತವಾಗಿ ಮೂಡಿಸಿದೆ.
    ನಾವು ಹಾಡುತ್ತೇವೆ . ..  . ಆದರೆ ಎಂತಹ ಹಾಡುಗಳನ್ನು  ? ಸಂತೋಷದ ಮದುವೆ, ಮುಂಜಿ, ಹುಟ್ಟು ಪ್ರೇಮದ ಕಾವ್ಯಗಳು ಮನುಷ್ಯನ ಭಾವಗಳಿಗೆ ಅನುಸಾರವಾಗಿ ಅಭಿವ್ಯಕ್ತಿಗೊಂಡು ಅಜರಾಮವಾಗಿವೆ. ಹಾಗೆಯೆ ವಿಫಲ ಪ್ರೇಮದ ವಿಷಾದ ಗೀತೆಗಳು , ಮUಳÀನ್ನು ಬೀಳ್ಕೊಡುವಾÀಗಿನ ದುಃಖ ಗೀತೆಗಳು, ತವರಿನ ವ್ಯಾಮೋಹದ ಮೋಹಕ ಸಾಲುಗಳು, ಸಾವಿನ ದುರಂತ , ವಿರಹ ವೇದನೆಯ ಆರ್ತತೆ    ಯನ್ನು ವ್ಯಕ್ತಪಡಿಸುವ ಶೋಕ ಗೀತೆಗಳು  ಇವೆಲ್ಲವೂ ನಮ್ಮ ಪರಂಪರೆಯ ಅವಿüಭಾಜ್ಯ ಅಂಗವಾಗಿವೆ. ಮನುಷ್ಯ ಜೀವಿಯ ಎಲ್ಲಾ ಭಾವಗಳು ಮತ್ತು ಎಲ್ಲಾ ಸನ್ನಿವೇಶಗಳಿಗೆ ಸಂವಾದಿಯಾಗುವ ಹಾಡುಗಳು. ಅರ್ಥಾತ್ ಭಾವಕ್ಕೆ ಅನುಗುಣವಾದ ಕಾವ್ಯವು ನಮ್ಮ ಸಂಪ್ರದಾಯವಾಗಿದೆ. ಕ್ರಮೇಣ ರಾಗ , ತಾಳ , ಲಯ ಛಂದಸ್ಸಿನ ಆಭರಣಗಳಿಂದ ಮುಕ್ತಗೊಂಡ ಕಾವ್ಯವು ತನ್ನ ನೆಲೆಗಳನ್ನು ವಿಸ್ತರಿಸತೊಡಗಿತು. ವೈಯಕ್ತಿಕತೆಗಳನ್ನು ಮೀರಿ ಸಾಮಾಜಿಕ ಸಂದರ್ಭಗಳಿಗೆ ದನಿಯನ್ನು ಒದಗಿಸಿತು.
    ಚಳುವಳಿಗಳು ಹಾಗೂ ಜಗತ್ತಿನ ಕ್ರಾಂತಿಗಳಿಗೆ ಪೂರಕವಾಗಿ ಕಾವ್ಯವೆಂಬುದು ವಿಭಿನ್ನ ಗಂಟಲಿನ ಅಭಿವ್ಯಕ್ತಿಯಾಯಿತು. ಗಡಿಗಳನ್ನು ಮೀರಿದ ಕಾವ್ಯ ಎಲ್ಲಾ ಬಂಧನಗಳ ಸರಪಳಿಗಳನ್ನು ತುಂಡರಿಸುವ ಸಾಧನವಾಯಿತು. ಹಾಗೂ ಕ್ರಾಂತಿಯ ರಣಕಹಳೆಗೆ ದನಿಗಳನ್ನು ಒದಗಿಸಿತು. ಅಷ್ಟೆ ಅಲ್ಲದೆ ಪ್ರಭುತ್ವದ ಸವಾಲುಗಳಿಗೆ ಎದೆಯೊಡ್ಡುವ ಸ್ಪಷ್ಟತೆ ಮತ್ತು ತಾತ್ವಿಕತೆ ಕಾವ್ಯದ ಶಕ್ತಿಯಾಗಿದೆ. ಹೀಗೊಂದು ಸಂದರ್ಭ . .. . ಸಮಕಾಲೀನ ಇರಾನ್ ದೇಶದ ಸಾಮಾಜಿಕ ಸಂದರ್ಭವನ್ನು ಗಮನಿಸಿಬಹುದು. ಸೈಯದ್ ಹುಸೇನ್ ಮೌಸಮಿ ಎಡ ಪಂಥೀಯ ಚಿಂತಕ , ಕವಿ ಮತ್ತು ವಾತು ಶಿಲ್ಪಿ . ಅಧಿಕಾರದ ಹಾವು-ಏಣಿಯಾಟದಲ್ಲಿ ಇರಾನಿನ ಪ್ರಧಾನ ಮಂತ್ರಿಯಾಗಿದ್ದ ಆತನನ್ನು ಬಲಪಂಥೀಯ ಗುಂಪು ಉದ್ದೇಶ ಪೂರ್ವಕವಾಗಿ ಮೂಲೆ ಗುಂಪು ಮಾಡಿತು. ಆತ ಇಪ್ಪತ್ತು ವರ್ಷಗಳ ಕಾಲ ರಾಜಕೀಯವಾಗಿ ಅಜ್ಞಾತÀವಾಸವನ್ನು ಅನುಭವಿಸಿದ. ಆದರೆ ಆ ಎರಡು ದಶಕಗಳ ಅವಧಿ ಆತನ ಸಾಲಿಗೆ ಸೃಜನ ಶೀಲ ಪರ್ವವಾಗಿತ್ತು. ಆತ ಆ ಕಾಲವನ್ನು ವಾಸ್ತು ಶಿಲ್ಪಿಯಾಗಿ ಮತ್ತು ಕವಿಯಾಗಿ ತನ್ನನ್ನು  ತೊಡಗಿಸಿಕೊಂಡ .  ಆ ನಂತರ ರಾಜಕೀಯ ಪಲ್ಲಟಗಳ ಕ್ಷೋಭೆಯಲ್ಲಿ ಆತ ಇರಾನಿನ ಜನತೆಯ ಒತ್ತಾಸೆಗೆ ಮಣಿದು 2009ನೇ ಇಸವಿಯಲ್ಲಿ ಇರಾನಿನ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ .ಚುನಾವಣೆಯಲ್ಲಿ ವ್ಯಾಪಕವಾದ ಅಕ್ರಮ ನಡೆಯಿತು ಹಾಗೂ ಮೌಸಮಿ ಅಧ್ಯಕ್ಷಿಯ ಚುನಾವಣೆಯಲ್ಲಿ  ಸೋಲನ್ನು ಅನುಭವಿಸಿದ. ಆದರೆ ಇರಾನಿನ ಜನತೆ ಆತನ ಸೋಲನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಜನತೆ ರಸ್ತೆಗೆ ಇಳಿಯಿತು. ಪ್ರತಿಭಟನೆ ಮುಖ್ಯ ಉದ್ದೇಶವಾಯಿತು. ಜೀವನದ ಹಂಗುತೊರೆದ ಜನತೆ ಪ್ರಭುತ್ವದ ವಿರುದ್ಧ ಸೆಟೆದು ನಿಂತಿತು. ಪ್ರಭುತ್ವವು ಮೌಸವಿಗೆ ಮರಣ ದಂಡನೆ ವಿಧಿಸಿತು. ಆಗ ಅವನ ಬೆಂಬಲಿಗರಾದ ಅಪಾರ ಸಂಖ್ಯೆಯ ಕ್ರಾಂತಿಕಾರಿ ಮಹಿಳೆಯರು ತಮ್ಮ ಮನೆಗಳ ಟೆರೆಸೀನ ಮೇಲೆ ಹÀತ್ತಿ ದೃಢವಾಗಿ ನಿಂತರು ಮತ್ತು ತಮ್ಮ ದನಿಗೆ ಪ್ರತಿಭಟನೆಯ ನೈತಿಕ ದೃಢತೆಯ ,ಸ್ವಾಭಿಮಾನದ, ತಾತ್ವಿಕತೆಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯನ್ನು ತುಂಬಿದರು. ಮತ್ತು ಕ್ರಾಂತಿಯ ಕವನಗಳನ್ನು ನಿರಂತರವಾಗಿ ಹಾಡಿದರು. ರಸ್ತೆಗಳಲ್ಲಿ  ದಿಗ್ಬಂಧನ , ರಕ್ತಪಾತ ಮತ್ತು “`ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಮೊಳಗುತ್ತಿತ್ತು. ಅಪಾರ ಭಯ, ಸಾವು ನೋವು ಮತ್ತು ಮಿಲಿಟರಿಯ ದೌರ್ಜನ್ಯದ ನಡುವೆ ಟೆರೇಸ್ ಮೇಲಿನಿಂದ ಕ್ರಾಂತಿಕಾರಿ ಮಹಿಳೆಯರ ಕಾವ್ಯ ಗುಡುಗುತ್ತಿತ್ತು.
ತೋಳಗಳೇ , ತಿಳಿದುಕೊಳ್ಳಿ
ತಂದೆ ಸತ್ತರೆ ನಮ್ಮ ಬುಡಕಟ್ಟಿನಲ್ಲಿ
ಅವನ ಬಂದೂಕು ಉಳಿಯುತ್ತದೆ.
 ಆ ಗುಂಪಿನ ಎಲ್ಲಾ ಗಂಡಸರು ಸತ್ತರೂ
ಮರದ ತೊಟ್ಟಿಲಿನಲ್ಲಿ ಚಿಗುರು ಅರಳುತ್ತಿರುತ್ತದೆ.       
    ಸಾಂಸ್ಕøತಿಕ ರಾಜಕಾರಣದ ಹುನ್ನಾರಗಳನ್ನು ಬಹಿರಂಗಪಡಿಸುವ ಹಾಗೂ ಪರಂಪರೆ ಮತ್ತು ಸಮಕಾಲೀನತೆಗೆ ಸ್ಪಂದಿಸುವ ಧ್ವನಿಗಳು, ನೋವು ಮತ್ತು ಆಕ್ರೋಶಗಳ ದ್ರವ್ಯವನ್ನು ಉರುವಲಾಗಿ ಬಳಸಿ ಎದೆತಟ್ಟಿ ಮೊಳಗುತ್ತಿದ್ದವು. ಖಾಸಗಿತನ ಮತ್ತು ಸಾರ್ವಜನಿಕತೆಯು ಪರಸ್ಪರ ನಂಬಿಕೆ, ಮೌಲ್ಯಗಳು , ಬದುಕಿನ ಭದ್ರತೆ ಹಾಗೂ ಬಾಂಧವ್ಯಗಳು ಹುಡಿಯಾಗಿ ಮಣ್ಣುಗೂಡುತ್ತಿದ್ದ ಅತಂತ್ರಸ್ಥಿತಿಯಲ್ಲಿಯೂ ತನ್ನ ಭಾವೋತ್ಕರ್ಷವನ್ನು ಯಶಸ್ವಿಯಾಗಿ ಸಂವಹನಗೊಳಿಸಿದ ಹಾಗೂ ಪ್ರಭುತ್ವದ  ಕ್ರೌರ್ಯದ ರಕ್ತಸಿಕ್ತ ಗೆರೆಗಳನ್ನು ಬಯಲಿಗೆಳೆದ ಇರಾನಿ ಮಹಿಳೆ ಗಾಢವಿಷಾದದ ನಡುವೆಯೂ ತಣ್ಣಗಿನ ದನಿಯನ್ನು ಉಳಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾದ ಅಸೀಮ ಸೃಜನಶೀಲ ಕ್ರಿಯೆಯಾಗಿದೆ. ಸಾವು ಮುಖಾಮುಖಿಯಾದಾಗಲೂ  ತನ್ನ ಅನಿವಾರ್ಯ ರಾಜಕೀಯ ಪ್ರಜ್ಞೆಯನ್ನು  ಉಳಿಸಿಕೊಂಡದ್ದು ಮತ್ತು ಕಾವ್ಯದ ಅಭಿವ್ಯಕ್ತಿಯ ಹೊಸ ಸಾಧ್ಯತೆಯಾಗಿ ಪ್ರಭುತ್ವದ ವಿರುದ್ಧ ಜೀವದ ಹಂಗು ತೊರೆದು ಹೋರಾಡುವ ಸಂದರ್ಭವಾಗಿ ಟೆರೇಸ್ ಕಾವ್ಯ ವಿಶ್ವದ ಸಾಹಿತಿಕ ಚರಿತ್ರೆಯಲ್ಲಿ ತನ್ನ ಐತಿಹಾಸಿಕ ಹೆಜ್ಜೆಗಳನ್ನು ಮೂಡಿಸಿತು. ಕ್ರಾಂತಿಯ ಸೆಲೆಯನ್ನು ಹಿಡಿದಿಟ್ಟುಕೊಳ್ಳುವ ಸಂದರ್ಭದ ತಲ್ಲಣಗಳನ್ನು ಇರಾನಿ ಮಹಿಳೆ ಸಶಕ್ತವಾಗಿ ಹೀಗೆ ಅಭಿವ್ಯಕ್ತಿಗೊಳಿಸಿದ್ದಾಳೆ.
    ನಮ್ಮ ರಕ್ತವನ್ನು ಹರಿಸಲು ನಮ್ಮ
 ಗಂಟಲು ಹರಿಯಲು ನಮ್ಮನ್ನು ಯಾಕೆ
 ಆಹ್ವಾನಿಸಿದಿರಿ ಸಂಭsÀ್ರಮದ ಪಾರ್ಟಿಗೆ
    ಹೀಗೆ ಎಲ್ಲಾ ನೋವು ಹಿಂಸೆ ಮತ್ತು ಯಾತನೆಯನ್ನು ತನ್ನ ಕಾವ್ಯದ ವಸ್ತು ವಿಷಯವಾಗಿ ಶೋಧನೆ ಮಾಡಲು ಆಕೆ ಉತ್ಸುಕಳಾಗಿದ್ದಾಳೆ. ಮತ್ತು ಯಾವ ಮುಲಾಜು ಕೂಡ ಇಲ್ಲದೆ , ಆಕೆ ಪ್ರಭುತ್ವಕ್ಕೆ ಸವಾಲನ್ನೆಸೆಯುತ್ತಾಳೆ ಹಾಗೂ ಕ್ರಾಂತಿಯ ಸಾಧ್ಯತೆಯನ್ನು ನಿರ್ಮಮಕಾರದಿಂದ ನೋಡುವ ಅಜಾÐತ ಕವಯತ್ರಿಯು ಬಿಸಿಲು ಬೆಳದಿಂಗಳನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಸ್ಥಿತಿಗೆ ತಲುಪಿದ್ದು , ಹೀಗೆಂದು ತನ್ನ ಟೆರೇಸಿನ ಮೇಲಿನಿಂದ ಹಾಡುತ್ತಾಳೆ ;
ನನಗೆ ಮಾಯದ ಗಾಯ ಬೇಕು
ಆ ಗಾಯವು ಚೀರಾಡ ಬೇಕು
ನಮ್ಮೆಲ್ಲರ ನಿದ್ದೆ ಕಸಿಯ ಬೇಕು
ವ್ರಣವಾಗಿ ಕಾಡಬೇಕು
      ಇನ್ನೂ ಕೆಲವು ಮಹಿಳೆಯರು ತಮ್ಮ ಗಾಢ ವಿಷಾದದ ನಡುವೆಯೂ ಉಳಿಸಿಕೊಂಡ ಅಪಾರ ಆಶಾವಾದವನ್ನು , ಮತ್ತು ಮುಂಬರುವ ದಿನಗಳಲ್ಲಿ ತನಗೆ ದಕ್ಕಬೇಕಾದ ಪಾಲನ್ನು ನಿರ್ವಂಚನೆಯಿಂದ ಪಡೆದುಕೊಳ್ಳಲು ಮಾನಸಿಕವಾಗಿ ಹೀಗೆ ತಯಾರಾಗಿದ್ದಾಳೆ
ನಮಗೆ ಮಳೆಯಲ್ಲಿ ನೆನೆಯಬೇಕಿದೆ
ಆ ಹನಿಗಳಲ್ಲಿ ನಮ್ಮ ಕಣ್ಣಿನ ಕಿಸರು
ಹರಿದುಹೋಗಬೇಕಿದೆ . ಇಡೀ ಜಗತ್ತನ್ನು
ವಿಭಿನ್ನ ನೋಟದಿಂದ ನೋಡ ಬೇಕಿದೆ
                     ***********


ಚೌಕಾಶಿ

                   
ಕೆಲವು ಅಜನ್ಮಸಿದ್ಧ ಹಕ್ಕುಗಳನ್ನು ನಮಗೆ ನಾವೇ ಘೋಷಿಸಿಕೊಂಡು ಬಿಟ್ಟಿರುತ್ತೇವೆ. ಅಂತಹದೊಂದು  ಆಜನ್ಮ ಸಿದ್ಧ ಹಕ್ಕನ್ನು ನಾನು ಬೀಬಿ ಎಂದು ಕರೆಯುವ ನಮ್ಮ ತಾಯಿ ಘೋಷಿಸಿಕೊಂಡಿದ್ದರು. ಅದೆಂದರೆ, ಚೌಕಾಸಿ ವ್ಯಾಪಾರ ಮಾಡೋದು. ಚೌಕಾಸಿ ಇಲ್ಲದೆ ವ್ಯಾಪಾರವೇ ಇಲ್ಲವೆಂಬುದು  ಬೀಬೀಯ ಅಭಿಮತವಾಗಿತ್ತು. ಹೀಗಾಗಿ ನಾನು ಕಣ್ಣು ಬಿಟ್ಟಾಗಿನಿಂದ ಚೌಕಾಸಿ ವ್ಯಾಪಾರದ ಪರಿಸರವೇ ಸುತ್ತಮುತ್ತಲೂ ಇತ್ತು. ಮತ್ತು ಕುಟುಂಬದ ಹಿತ ಕಾಯುವ ಸದ್ಗøಹಣಿಯ ಆದ್ಯ ಕರ್ತವ್ಯವೆಂದರೆ ಚೌಕಾಸಿ ವ್ಯಾಪಾರದ ಮೂಲಕ ಕುಟುಂಬದ ಆದಾಯವನ್ನು ಉಳಿತಾಯ ಮಾಡಿ, ಒಂದಿಷ್ಟು ಪುಟ್ಟ ಗಂಟನ್ನು ಆಪತ್ಕಾಲಕ್ಕೆಂದು ಕೂಡಿಡಬೇಕೆಂಬುದಾಗಿತ್ತು.
       ರೈತನ ಮಗಳಾದ ಬೀಬೀ ಸರ್ಕಾರೀ ನೌಕರರಾದ ನನ್ನ ತಂದೆಯನ್ನು ಮದುವೆ ಮಾಡಿಕೊಂಡ ನಂತರ ತಿಂಗಳ ಕೊನೆಯ ಪರದಾಟದ ದಿನಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಆದರೂ ನಮ್ಮ ತಂದೆಯ ವಿಪರೀತ ಔದಾರ್ಯದ ದೆಸೆಯಿಂದ ನಮ್ಮ ಮನೆ ಸದಾಕಾಲ ನೆಂಟರಿಷ್ಟರು ಮತ್ತು ಸ್ನೇಹಿತ ವರ್ಗದ ಕುಟುಂಬದವರಿಂದ ತುಂಬಿ ತುಳುಕುತ್ತಿತ್ತು. ನಾನು ಮತ್ತು ನನ್ನ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದರೂ ಕೂಡಾ ನಮ್ಮ ಮನೆಗೆ ಪ್ರತಿ ತಿಂಗಳ ಆರಂಭದಲ್ಲಿ ಒಂದು ಪಲ್ಲ ಸಣ್ಣಕ್ಕಿಯ ಮೂಟೆ ಬರುತ್ತಿತ್ತು. ಅನ್ನವೊಂದಿದ್ದರೆ ಚಟ್ನಿ ಜೊತೆಯಲ್ಲಾದರೂ ತಿನ್ನಬಹುದು ಮತ್ತು ತಿನ್ನಿಸಬಹುದು.(ನೆಂಟರಿಷ್ಟರಿಗೆ) ಎಂಬ ವಿಚಾರ ಬೀಬಿಗೆ ಇತ್ತು. ಹೀಗಾಗಿ ಮೊದಲೇ ಮೈಗೂಡಿಸಿಕೊಂಡಿದ್ದ ಚೌಕಾಸಿ ವ್ಯಾಪಾರ ಈಗ ಬೀಬಿ ನೆರವಿಗೆ ಬಂದಿತ್ತು. ನಾನು ನೋಡು ನೋಡುತ್ತಿದ್ದಂತೆಯೇ ಮೊಸರಿನ ಅಮ್ಮ, ಗಡಿಗೆ ತುಂಬ ಮೊಸರನ್ನು ಕುಕ್ಕೆಯಲ್ಲಿ ಹೊತ್ತು ತಂದು ಹುಸ್ಸೆಂದು ಕುಳಿತಾಗ ಬೀಬಿ ಪಾತ್ರೆ ತೆಗೆದುಕೊಂಡು ಹಾಜರಾಗುತ್ತಿದ್ದರು. ಅವರು ಚೌಕಾಸಿ ಸ್ವಭಾವದ ಅರಿವಿಂದ ಮೊಸರಿನ ಅಮ್ಮ ಗಟ್ಟಿ ಮೊಸರನ್ನು ಮುಚ್ಚಿಟ್ಟು ನೀರಿನಂತಹ ಮಜ್ಜಿಗೆಯ ಮಡಕೆಯನ್ನು ತೆರೆದಾಗ ಬೀಬಿ ಸುತಾರಾಂ ಒಪ್ಪುತ್ತಿರಲಿಲ್ಲ. ಮೊಸರಿನ ಅಮ್ಮ ಕೊನೆಗೂ ಅನಿವಾರ್ಯವಾಗಿ ಗಟ್ಟಿ ಮೊಸರನ್ನು ಅವರ ಪಾತ್ರೆಗೆ ಸುರಿದು ಆಮೇಲೆ ಹಣವನ್ನು ಸಿಕ್ಕಾಪಟ್ಟೆ ಚೌಕಾಸಿ ನಡೆದು ಆಕೆ ಆ ದುಡ್ಡನ್ನು ತನ್ನ ಸೊಂಟದ ಚೀಲ್ಕ್ಕೆ ಸಿಕ್ಕಿಸಿ, ತನ್ನ ಕಷ್ಟ-ಸುಖವನ್ನು ಹೇಳಿಕೊಳ್ಳಲಾರಂಭಿಸಿ, ಅದು ಮಗಿಯುವ ವೇಳೆಗೆ ಮೊಸರಿನ ಪ್ರಸಂಗಕ್ಕೆ ಸುಮಾರು ನಲವತ್ತೈದರಿಂದ  ಒಂದು ಗಂಟೆಯ ಕಾಲ ವಿನಿಯೋಗವಾಗುತ್ತಿತ್ತು. ಅಷ್ಟರೊಳಗೆ ಮೊಸರಿಮ್ಮ ತಾನು ತಿಂಡಿಯನ್ನು ಕೂಡಾ ಮಾಡದಏ ಬಂದಿರುವುದಾಗಿ ಚಾಕಚಕ್ಯತೆಯಿಂದ  ಸ್ಪಷ್ಟ ಪಡಿಸುತ್ತಿದ್ದಳು. ಆ ಮೇರೆಗೆ ಬೀಬಿಯ ಮನಸ್ಸು ಕರಗಿ ಒಳ ಬಂದು ತಟ್ಟೆ ಆಕಾರದ ಒಂದು ದೊಡ್ಡ ರೊಟ್ಟಿ ಅದರ ಮೇಲೆ ಒಂದಿಷ್ಟು ಪಲ್ಯ ಆಕೆಗೆ ನೀಡುತ್ತಿದ್ದರು. ಮೊಸರಮ್ಮ ತೃಪ್ತಿಯಾಗಿ ತಿಂದು ತೇಗಿ ಮುಂದಿನ ಮಾರಾಟಕ್ಕೆ ಹೋಗುತ್ತಿದ್ದಳು. ಹಬ್ಬಗಿಬ್ಬ ಆಗಿದ್ದರೆ, ಬಿರಿಯಾನಿ, ಪಾಯಸ, ಮೊಹರಂ ಆಗಿದ್ದರೆ. ಚೇಂಗಾ ಎಂಬ ಸಿಹಿ ಖಾದ್ಯ ಬುತ್ತಿ, ಇನ್ನೇನೋ ವೈವಿಧ್ಯಪೂರ್ಣ ಅಡುಗೆ ಇದ್ದು, ಮೊಸರಮ್ಮನ ನಿಯಮಿತ ಬರುವಿಗೆ ವಿಶೇಷ ಆಕರ್ಷಣೆಯನ್ನು ಒದಗಿಸುತ್ತಿತ್ತು. ಹೀಗಾಗಿ ಮೊಸರಮ್ಮ ನಮ್ಮ ಬೀಬಿಯ ಮನೆಯನ್ನು ಯಾವತ್ತೂ ತಪ್ಪಿಸಿಕೊಳ್ಳಲಿಲ್ಲ. ಹೀಗೆಯೇ ವರತ್ನ ರೂಪವಾಗಿ ಬರುತ್ತಿದ್ದ ಅನೇಕರಿದ್ದರು. ತರಕಾರಿ, ಹೂವು, ಬೆಣ್ಣೆ ಮೀನು ಮಾರಾಟ ಮಾಡುವವರು ಬಹುತೇಕ ಹೆಣ್ಣು ಮಕ್ಕಳೇ ಕುಕ್ಕೆಯನ್ನು ತಲೆಯ ಮೇಲಿಟ್ಟು, ನಿಯಮಿತವಾಗಿ ವರತ್ನೇ ಮನೆಗಳಿಗೆ ಹೋಗುತತಿದ್ದರು. ಈ ವರತ್ನೆ ಶಭ್ಧದ ಉತ್ಪತ್ತಿಯ ಬಗ್ಗೆ ನನಗೆ ಯಾವುದೇ ರಹಾ ಕಾಣಿಸುತ್ತಿಲ್ಲ. ಇದು ವರ್ತನೆ ಎಂತಲೇ ಅಥವಾ ಇನ್ನೇನೋ ನನಗಂತೂ ಇದೂವರೆಗೆ ಅರ್ಥೈಸಲು ಸಾಧ್ಯವಾಗಿಲ್ಲ.
       ಬೀಬಿ ‘ಲಟ್’ ಎಂದು ಬೆಂಡೆಕಾಯಿಯ ತುದಿಯನ್ನು ಮುರಿದು, ಎಳೆಯದೋ, ಅಥವಾ ಬಲಿತದ್ದೋ ಎಂದು ಪರೀಕ್ಷಿಸಿ,  ಎಳೆಯ ಬೆಂಡೆಕಾಯಿಯನ್ನು ಆರಿಸಿ, ತಕ್ಕಡಿಯು ಕೆಳಗೆ ವಾಲುವವರೆಗೂ ತಕ್ಕಡಿಯಲ್ಲಿ ಸೇರಿಸಿ ತೂಕ ಮಾಡುತ್ತಾ”ನೀವು ಬೆಳೆದವರು, ಒಂದಿಷ್ಟು ತೂಕ ಸಮವಾಗಿ ಕೊಡಬೇಕು “ ಎಂದು ಬುದ್ಧಿವಾದವನ್ನು ಹೇಳುತ್ತಾ ಬೆಲೆಯಲ್ಲಿ ಚೌಕಾಸಿ ಮಾಡಲಾರಂಭಿಸುತ್ತಿದ್ದರು. ಬೆಲೆ ಮತ್ತು ಕ್ವಾಲಿಟಿಯಲ್ಲಿ ಈ ಎರಡು ಅಂಶಗಳಲ್ಲಿ ಚೌಕಾಸಿ ಸಾಗುತ್ತು. ಅದರೊಡನೆ ಕಷ್ಟ-ಸುಖ ಒಂದಿಷ್ಟು ಊಟ ತಿಂಡಿ ಇವೆಲ್ಲವೂ  ಯಥಾ ಪ್ರಕಾರ ಸಾಗುತ್ತಿತ್ತು.
         ಈ ಚೌಕಾಸಿ ಪ್ರಸಂಗ ಒಮ್ಮೊಮ್ಮೆ ಬೀಬೀಗೆ ವಿರುದ್ದಾಸ್ತ್ರವೂ ಆಗುತತಿತ್ತು. ಹಾಸನದ ಜಾತ್ರೆ ಮತ್ತು ವಸ್ತು ಪ್ರದರ್ಶನವು ಸುಪ್ರಸಿದ್ಧವಾಗಿದ್ದ ಕಾಲವೊಂದಿತ್ತು. ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ವ್ಯಾಪಾರಸ್ಥರು ತಮ್ಮ   ಮಾರಾಟ  ಮಳಿಗೆಯನ್ನು ತೆರೆದಿದ್ದರು.  ಈಗಿನ ಮಾಲ್‍ಗಳಿಗಿಂತಲೂ ಅದ್ಭುತ ಲೋಕವಾಗಿತ್ತದು.


ಕೆಲವು ಅಜನ್ಮಸಿದ್ಧ ಹಕ್ಕುಗಳನ್ನು ನಮಗೆ ನಾವೇ ಘೋಷಿಸಿಕೊಂಡು ಬಿಟ್ಟಿರುತ್ತೇವೆ. ಅಂತಹದೊಂದು  ಆಜನ್ಮ ಸಿದ್ಧ ಹಕ್ಕನ್ನು ನಾನು ಬೀಬಿ ಎಂದು ಕರೆಯುವ ನಮ್ಮ ತಾಯಿ ಘೋಷಿಸಿಕೊಂಡಿದ್ದರು. ಅದೆಂದರೆ, ಚೌಕಾಸಿ ವ್ಯಾಪಾರ ಮಾಡೋದು. ಚೌಕಾಸಿ ಇಲ್ಲದೆ ವ್ಯಾಪಾರವೇ ಇಲ್ಲವೆಂಬುದು  ಬೀಬೀಯ ಅಭಿಮತವಾಗಿತ್ತು. ಹೀಗಾಗಿ ನಾನು ಕಣ್ಣು ಬಿಟ್ಟಾಗಿನಿಂದ ಚೌಕಾಸಿ ವ್ಯಾಪಾರದ ಪರಿಸರವೇ ಸುತ್ತಮುತ್ತಲೂ ಇತ್ತು. ಮತ್ತು ಕುಟುಂಬದ ಹಿತ ಕಾಯುವ ಸದ್ಗøಹಣಿಯ ಆದ್ಯ ಕರ್ತವ್ಯವೆಂದರೆ ಚೌಕಾಸಿ ವ್ಯಾಪಾರದ ಮೂಲಕ ಕುಟುಂಬದ ಆದಾಯವನ್ನು ಉಳಿತಾಯ ಮಾಡಿ, ಒಂದಿಷ್ಟು ಪುಟ್ಟ ಗಂಟನ್ನು ಆಪತ್ಕಾಲಕ್ಕೆಂದು ಕೂಡಿಡಬೇಕೆಂಬುದಾಗಿತ್ತು.
       ರೈತನ ಮಗಳಾದ ಬೀಬೀ ಸರ್ಕಾರೀ ನೌಕರರಾದ ನನ್ನ ತಂದೆಯನ್ನು ಮದುವೆ ಮಾಡಿಕೊಂಡ ನಂತರ ತಿಂಗಳ ಕೊನೆಯ ಪರದಾಟದ ದಿನಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಆದರೂ ನಮ್ಮ ತಂದೆಯ ವಿಪರೀತ ಔದಾರ್ಯದ ದೆಸೆಯಿಂದ ನಮ್ಮ ಮನೆ ಸದಾಕಾಲ ನೆಂಟರಿಷ್ಟರು ಮತ್ತು ಸ್ನೇಹಿತ ವರ್ಗದ ಕುಟುಂಬದವರಿಂದ ತುಂಬಿ ತುಳುಕುತ್ತಿತ್ತು. ನಾನು ಮತ್ತು ನನ್ನ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದರೂ ಕೂಡಾ ನಮ್ಮ ಮನೆಗೆ ಪ್ರತಿ ತಿಂಗಳ ಆರಂಭದಲ್ಲಿ ಒಂದು ಪಲ್ಲ ಸಣ್ಣಕ್ಕಿಯ ಮೂಟೆ ಬರುತ್ತಿತ್ತು. ಅನ್ನವೊಂದಿದ್ದರೆ ಚಟ್ನಿ ಜೊತೆಯಲ್ಲಾದರೂ ತಿನ್ನಬಹುದು ಮತ್ತು ತಿನ್ನಿಸಬಹುದು.(ನೆಂಟರಿಷ್ಟರಿಗೆ) ಎಂಬ ವಿಚಾರ ಬೀಬಿಗೆ ಇತ್ತು. ಹೀಗಾಗಿ ಮೊದಲೇ ಮೈಗೂಡಿಸಿಕೊಂಡಿದ್ದ ಚೌಕಾಸಿ ವ್ಯಾಪಾರ ಈಗ ಬೀಬಿ ನೆರವಿಗೆ ಬಂದಿತ್ತು. ನಾನು ನೋಡು ನೋಡುತ್ತಿದ್ದಂತೆಯೇ ಮೊಸರಿನ ಅಮ್ಮ, ಗಡಿಗೆ ತುಂಬ ಮೊಸರನ್ನು ಕುಕ್ಕೆಯಲ್ಲಿ ಹೊತ್ತು ತಂದು ಹುಸ್ಸೆಂದು ಕುಳಿತಾಗ ಬೀಬಿ ಪಾತ್ರೆ ತೆಗೆದುಕೊಂಡು ಹಾಜರಾಗುತ್ತಿದ್ದರು. ಅವರು ಚೌಕಾಸಿ ಸ್ವಭಾವದ ಅರಿವಿಂದ ಮೊಸರಿನ ಅಮ್ಮ ಗಟ್ಟಿ ಮೊಸರನ್ನು ಮುಚ್ಚಿಟ್ಟು ನೀರಿನಂತಹ ಮಜ್ಜಿಗೆಯ ಮಡಕೆಯನ್ನು ತೆರೆದಾಗ ಬೀಬಿ ಸುತಾರಾಂ ಒಪ್ಪುತ್ತಿರಲಿಲ್ಲ. ಮೊಸರಿನ ಅಮ್ಮ ಕೊನೆಗೂ ಅನಿವಾರ್ಯವಾಗಿ ಗಟ್ಟಿ ಮೊಸರನ್ನು ಅವರ ಪಾತ್ರೆಗೆ ಸುರಿದು ಆಮೇಲೆ ಹಣವನ್ನು ಸಿಕ್ಕಾಪಟ್ಟೆ ಚೌಕಾಸಿ ನಡೆದು ಆಕೆ ಆ ದುಡ್ಡನ್ನು ತನ್ನ ಸೊಂಟದ ಚೀಲ್ಕ್ಕೆ ಸಿಕ್ಕಿಸಿ, ತನ್ನ ಕಷ್ಟ-ಸುಖವನ್ನು ಹೇಳಿಕೊಳ್ಳಲಾರಂಭಿಸಿ, ಅದು ಮಗಿಯುವ ವೇಳೆಗೆ ಮೊಸರಿನ ಪ್ರಸಂಗಕ್ಕೆ ಸುಮಾರು ನಲವತ್ತೈದರಿಂದ  ಒಂದು ಗಂಟೆಯ ಕಾಲ ವಿನಿಯೋಗವಾಗುತ್ತಿತ್ತು. ಅಷ್ಟರೊಳಗೆ ಮೊಸರಿಮ್ಮ ತಾನು ತಿಂಡಿಯನ್ನು ಕೂಡಾ ಮಾಡದಏ ಬಂದಿರುವುದಾಗಿ ಚಾಕಚಕ್ಯತೆಯಿಂದ  ಸ್ಪಷ್ಟ ಪಡಿಸುತ್ತಿದ್ದಳು. ಆ ಮೇರೆಗೆ ಬೀಬಿಯ ಮನಸ್ಸು ಕರಗಿ ಒಳ ಬಂದು ತಟ್ಟೆ ಆಕಾರದ ಒಂದು ದೊಡ್ಡ ರೊಟ್ಟಿ ಅದರ ಮೇಲೆ ಒಂದಿಷ್ಟು ಪಲ್ಯ ಆಕೆಗೆ ನೀಡುತ್ತಿದ್ದರು. ಮೊಸರಮ್ಮ ತೃಪ್ತಿಯಾಗಿ ತಿಂದು ತೇಗಿ ಮುಂದಿನ ಮಾರಾಟಕ್ಕೆ ಹೋಗುತ್ತಿದ್ದಳು. ಹಬ್ಬಗಿಬ್ಬ ಆಗಿದ್ದರೆ, ಬಿರಿಯಾನಿ, ಪಾಯಸ, ಮೊಹರಂ ಆಗಿದ್ದರೆ. ಚೇಂಗಾ ಎಂಬ ಸಿಹಿ ಖಾದ್ಯ ಬುತ್ತಿ, ಇನ್ನೇನೋ ವೈವಿಧ್ಯಪೂರ್ಣ ಅಡುಗೆ ಇದ್ದು, ಮೊಸರಮ್ಮನ ನಿಯಮಿತ ಬರುವಿಗೆ ವಿಶೇಷ ಆಕರ್ಷಣೆಯನ್ನು ಒದಗಿಸುತ್ತಿತ್ತು. ಹೀಗಾಗಿ ಮೊಸರಮ್ಮ ನಮ್ಮ ಬೀಬಿಯ ಮನೆಯನ್ನು ಯಾವತ್ತೂ ತಪ್ಪಿಸಿಕೊಳ್ಳಲಿಲ್ಲ. ಹೀಗೆಯೇ ವರತ್ನ ರೂಪವಾಗಿ ಬರುತ್ತಿದ್ದ ಅನೇಕರಿದ್ದರು. ತರಕಾರಿ, ಹೂವು, ಬೆಣ್ಣೆ ಮೀನು ಮಾರಾಟ ಮಾಡುವವರು ಬಹುತೇಕ ಹೆಣ್ಣು ಮಕ್ಕಳೇ ಕುಕ್ಕೆಯನ್ನು ತಲೆಯ ಮೇಲಿಟ್ಟು, ನಿಯಮಿತವಾಗಿ ವರತ್ನೇ ಮನೆಗಳಿಗೆ ಹೋಗುತತಿದ್ದರು. ಈ ವರತ್ನೆ ಶಭ್ಧದ ಉತ್ಪತ್ತಿಯ ಬಗ್ಗೆ ನನಗೆ ಯಾವುದೇ ರಹಾ ಕಾಣಿಸುತ್ತಿಲ್ಲ. ಇದು ವರ್ತನೆ ಎಂತಲೇ ಅಥವಾ ಇನ್ನೇನೋ ನನಗಂತೂ ಇದೂವರೆಗೆ ಅರ್ಥೈಸಲು ಸಾಧ್ಯವಾಗಿಲ್ಲ.
       ಬೀಬಿ ‘ಲಟ್’ ಎಂದು ಬೆಂಡೆಕಾಯಿಯ ತುದಿಯನ್ನು ಮುರಿದು, ಎಳೆಯದೋ, ಅಥವಾ ಬಲಿತದ್ದೋ ಎಂದು ಪರೀಕ್ಷಿಸಿ,  ಎಳೆಯ ಬೆಂಡೆಕಾಯಿಯನ್ನು ಆರಿಸಿ, ತಕ್ಕಡಿಯು ಕೆಳಗೆ ವಾಲುವವರೆಗೂ ತಕ್ಕಡಿಯಲ್ಲಿ ಸೇರಿಸಿ ತೂಕ ಮಾಡುತ್ತಾ”ನೀವು ಬೆಳೆದವರು, ಒಂದಿಷ್ಟು ತೂಕ ಸಮವಾಗಿ ಕೊಡಬೇಕು “ ಎಂದು ಬುದ್ಧಿವಾದವನ್ನು ಹೇಳುತ್ತಾ ಬೆಲೆಯಲ್ಲಿ ಚೌಕಾಸಿ ಮಾಡಲಾರಂಭಿಸುತ್ತಿದ್ದರು. ಬೆಲೆ ಮತ್ತು ಕ್ವಾಲಿಟಿಯಲ್ಲಿ ಈ ಎರಡು ಅಂಶಗಳಲ್ಲಿ ಚೌಕಾಸಿ ಸಾಗುತ್ತು. ಅದರೊಡನೆ ಕಷ್ಟ-ಸುಖ ಒಂದಿಷ್ಟು ಊಟ ತಿಂಡಿ ಇವೆಲ್ಲವೂ  ಯಥಾ ಪ್ರಕಾರ ಸಾಗುತ್ತಿತ್ತು.
         ಈ ಚೌಕಾಸಿ ಪ್ರಸಂಗ ಒಮ್ಮೊಮ್ಮೆ ಬೀಬೀಗೆ ವಿರುದ್ದಾಸ್ತ್ರವೂ ಆಗುತತಿತ್ತು. ಹಾಸನದ ಜಾತ್ರೆ ಮತ್ತು ವಸ್ತು ಪ್ರದರ್ಶನವು ಸುಪ್ರಸಿದ್ಧವಾಗಿದ್ದ ಕಾಲವೊಂದಿತ್ತು. ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ವ್ಯಾಪಾರಸ್ಥರು ತಮ್ಮ   ಮಾರಾಟ  ಮಳಿಗೆಯನ್ನು ತೆರೆದಿದ್ದರು.  ಈಗಿನ ಮಾಲ್‍ಗಳಿಗಿಂತಲೂ ಅದ್ಭುತ ಲೋಕವಾಗಿತ್ತದು.



Tuesday, 29 July 2014

ಕತ್ತಲೆಯ ಪ್ರೇತಗಳ ಸದ್ದಿಲ್ಲದ ಹೆಜ್ಜೆಗಳು

   
  (2013ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ )                   
      ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಾಚಾರವೆಂಬುದು ಪುರುಷನ ನಿಯಂತ್ರಿಸಲಾಗದ ಕಾಮದ ಅಭಿವ್ಯಕ್ತಿಯ ಬಿಡಿ ಘಟನೆಯಾಗಿ ಉಳಿದಿಲ್ಲ. ಬದಲಿಗೆ ಪುರುಷನ ಅಧಿಕಾರದ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ. ಮಹಿಳೆಯನ್ನು ತಹಬಂದಿಗೆ ತರಲು, ಪ್ರಶ್ನಿಸಲು, ಮಹಿಳೆಯ ಬಾಯಿ ಮುಚ್ಚಿಸಲು, ಸಾಮಾಜಿಕ ಪರಿಧಿಯಿಂದ ಭಿನ್ನವಾದ ಮೌಲ್ಯಗಳನ್ನು ಪ್ರತಿಪಾದಿಸುವ ಮಹಿಳೆಯನ್ನು ಶಿಕ್ಷಿಸಲು ಯಾವುದೇ ಒಂದು ಕುಟುಂಬದ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು-ಅತ್ಯಾಚಾರವನ್ನು ವೈಯಕ್ತಿಕ ಹಾಗೂ ಸಾಮೂಹಿಕ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ.

      ಹೀಗೆ.... ಅತ್ಯಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುವ ಅವಕಾಶ ಆಗ ಇರಲಿಲ್ಲ. ಯಾವಾಗ ಅನ್ನುತ್ತೀರೋ.... ಈಗ್ಯೆ 5 ವರ್ಷದ ಹಿಂದೆ ಕೂಡಾ ಅದರ ಬಗ್ಗೆ ಮಾತನಾಡುವುದು ತೀರಾ ಅಸಭ್ಯ ಎನ್ನುವ ಮನಃಸ್ಥಿತಿ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಇನ್ನು ಭವಿಷ್ಯತ್ತಿನ  ಬದುಕೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಆಕೆ ಕಳಂಕಿತಳು ಎಂಬ ಭಾವ ಕೂಡಾ ಪ್ರಧಾನವಾಗಿತ್ತು. ಆಕೆ ಕೂಡಾ ತನ್ನದಲ್ಲದ ತಪ್ಪಿಗೆ ಖಿನ್ನಳಾಗಿ, ಸಾಮಾಜಿಕವಾಗಿ ಪರಿತ್ಯಕ್ತೆಯಾಗಿದ್ದು ನರಳಬೇಕಾದ ಹೀನ ಪರಿಸ್ಥಿತಿ ಇತ್ತು. ಹೆಣ್ಣಿನ ಶೀಲ ಮತ್ತು ಪಾವಿತ್ರ್ಯದ ಗಡಿಗಳನ್ನು ಮಾತ್ರ ನಿರ್ಧರಿಸಿ, ಪುರುಷನಿಗೆ ಪೂರ್ಣ ರಿಯಾಯಿತಿಯನ್ನು ನೀಡಿರುವ ಸಮಾಜವು ತನ್ನ ಸಿದ್ಧಾಂತದ ಪ್ರತಿಪಾದನೆಗಾಗಿ ಮತ್ತು ಅದಕ್ಕೆ ಪುಷ್ಟಿಯನ್ನೀಯಲು ಅತ್ಯಾಚಾರಕ್ಕೊಳಗಾದ ಮಹಿಳೆಯ ‘ಬಲಿ’ಯನ್ನು ಸ್ವಾಗತಿಸುತ್ತದೆ. ಅದರಲ್ಲಿ ಆಕೆಯ ಯಾವುದೇ ತಪ್ಪಿಲ್ಲದಿದ್ದರೂ ಆಕೆಗೆ ಆತ್ಮಹತ್ಯೆಯೊಂದೇ ಬಿಡುಗಡೆ ಎಂದು ಸಮಾಜವು ಅಲಿಖಿತ ಶಾಸನವನ್ನು ಮಾಡಿದೆ. ಹೀಗಾಗಿ ಅತ್ಯಾಚಾರಕ್ಕೊಳಗಾದವಳ ಸಾವಿನ ಬಗ್ಗೆ ಸಮಾಜವು ಸಹಾನುಭೂತಿ ಪರವಾಗಿದೆ ಹೊರತು ಬದುಕುಳಿದವಳ ಬಗ್ಗೆಯಲ್ಲ. ಈ ರೀತಿಯ ಧೃಡತೆಯ ಗಟ್ಟಿಕಾಳುಗಳು ಸಮಾಜದ ಅಹಮಿಕೆಗೆ ಸವಾಲೊಡ್ಡುತ್ತವೆ.

     ಆಗ ಅತ್ಯಾಚಾರಗಳು ನಡೆಯುತ್ತಿರಲಿಲ್ಲವೇ? ಖಂಡಿತಾ ನಡೆಯುತ್ತಿದ್ದವು. ಹೆಚ್ಚು ಪ್ರಚಾರಕ್ಕೆ ಬರುತ್ತಿರಲಿಲ್ಲ. ವರದಿಯಾದ ಪ್ರಕರಣಗಳಿಗೆ ಸಿಕ್ಕ ಪ್ರಚಾರವೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿತ್ತು. ಇಡೀ ಪ್ರಕರಣವನ್ನು ಪೋಲೀಸಿನವರ ಕಣ್ತಪ್ಪಿಸಿ, ಗುಸುಗುಸು ಹಂತದಲ್ಲಿಯೇ ತೆರೆ-ಮರೆಯ ತೀರ್ಮಾನಗಳ ಮುಖಾಂತರ ಅಂತ್ಯ ಕಾಣಿಸುವ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಏನೋ ಒಂದಿಷ್ಟು ಪರಿಹಾರವನ್ನು ನೀಡಿ ಆಕೆಯ ಮೇಲೆ ನಡೆದ ಅತ್ಯಾಚಾರಕ್ಕೆ ಆಕೆಯೇ ಜವಾಬುದಾರಳೆಂದು ಸಾಧಿಸುತ್ತಿದ್ದರು. ಆಕೆ ಯಾವಾಗಲೂ ತನ್ನ ಮನೆಯ ಬಳಿ ನಿಲ್ಲುತ್ತಿದ್ದಳು;