ಬಾನು ಮುಷ್ತಾಕ್ ಆರ್.ಪಿ.ಎಲ್. ಕ್ವಾರ್ಟರ್ಸ್ ರಸ್ತೆ
ಬಿ.ಎಸ್ಸಿ., ಎಲ್.ಎಲ್.ಬಿ,. ಹಾಸನ -573201
ನ್ಯಾಂiÀi ವಾದಿ ಮೊಬೈಲ್ : 9448220339
8453868111
*************************************************************** ದಿನಾಂಕ: 11/12/2015
:: ವ್ಯಕ್ತಿ ವಿವರ ::
ಹೆಸರು : ಬಾನು ಮುಷ್ತಾಕ್
ಜನ್ಮ ದಿನಾಂಕ : 03-04-1948
ಜನ್ಮ ಸ್ಥಳ : ಹಾಸನ
ವಿದ್ಯಾರ್ಹತೆ : ಬಿ.ಎಸ್.ಸಿ.,ಎಲ್.ಎಲ್.ಬಿ.,
ತಂದೆ : ಎಸ್.ಎ. ರೆಹಮಾನ್
ತಾಯಿ : ಅಖ್ತರ್ ಬಾನು
ಪತಿ : ಮುಷ್ತಾಕ್ ಮೊಹಿದ್ದೀನ್
ಮಕ್ಕಳು : ಸಮೀನ ಮೆರಾಜ್, ಲುಬ್ನ ಹಿಜಾಬ್
ಆಯಿಷಾ ನರ್ಗೀಸ್,
ತಾಹೇರ್ಮುಷ್ತಾಕ್.
ಸಾರ್ವಜನಿಕ ಸೇವೆಯ ವಿವರಗಳು :
1) ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ
ಸದಸ್ಯೆಯಾಗಿ ಆಯ್ಕೆ.
2) ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ
ಅಧ್ಯಕ್ಷೆಯಾಗಿ.
3) ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ.
4) ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿ
5) ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ
ಸಲ್ಲಿಸಿದ್ದು.
6) ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ 1993ರಲ್ಲಿ
ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದೇನೆ.
ವೃತ್ತಿ :
1) 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗಿ
2) 1990ರಿಂದ ನ್ಯಾಯವಾದಿಯಾಗಿ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದೇನೆ.
:: ಸಾಹಿತ್ಯ ಕ್ಷೇತ್ರ ::
1) ಕಥಾ ಸಂಕಲನಗಳು : * ಹೆಜ್ಜೆ ಮೂಡಿದ ಹಾದಿ (1990)
* ಬೆಂಕಿ ಮಳೆ (1999)
* ಎದೆಯ ಹಣತೆ (2004)
* ಸಫೀರಾ (2006)
* ಬಡವರ ಮಗಳು ಹೆಣ್ಣಲ್ಲ (2014)
* ಇಬ್ಬನಿಯ ಕಾವು (2014 )
*ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ (2014)
* ಹಸೀನಾ ಮತ್ತು ಇತರ ಕಥೆಗಳು ( 2015)
* ಆದಿಲ್ಶಾಹಿ ಚರಿತ್ರೆಯಾದ ತಾರೀಕ್-ಎ- ಫರಿಷ್ತಾ
ಗ್ರಂಥವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಪ್ರಕಟವಾಗಿರುತ್ತದೆ
(2015)
* ಕವನ ಸಂಕಲನ ‘ಒದ್ದೆ ಕಣ್ಣಿನ ಬಾಗಿನ’ (2015)
* ಪ್ರಬಂಧ ಸಂಕಲನ ‘ಹೂ ಕಣಿವೆಯ ಚಾರಣ’(2015)
3) ಸಂಗ್ರಹ
1) ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಅನೇಕ
ಕಥೆಗಳು ಸೇರ್ಪಡೆಯಾಗಿವೆ.
ಅ) ಕಾಳೇಗೌಡ ನಾಗವಾರರವರ ಸಂಪಾದಕತ್ವದಲ್ಲಿ
‘ರಾಹಿಲ ಎಂಬ ಕನ್ಯೆಯ ಕಥೆ’(1984)
ಆ) ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ
ಕಾರ್ಮೋಡ’ ಎಂಬ ಕಥೆ(1987)
ಇ) ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ
ಹೆಣ್ಣಾಗು ಪ್ರಭುವೆ’
ಈ) ಪಾರಿವಾಳದ ರೆಕ್ಕೆಗಳು (2005)
2) 1999ರಲ್ಲಿ ಪ್ರಸಿಮ್ ಪ್ರಕಾಶನದವರು ಡಾ. ಆಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಶತಮಾನದ ಮಾಲಿಕೆಯ“ಅವಳ ಕತೆಗಳು’
ಸಂಕಲನದಲ್ಲಿ ಸೇರ್ಪಡೆ ‘ಸರಿದ ಕಾರ್ಮೋಡ’ ಎಂಬ ಕಥೆ.
3)ಡಾ. ಆಮೂರರ ಸಂಪಾದಕತ್ವದಲ್ಲಿ ಅಂಕಿತಪ್ರಕಾಶನದ‘‘ಸ್ವಾತಂತ್ರ್ಯೋತ್ತರ ಕನ್ನಡ ಕಥಾಲೋಕ”ದಲ್ಲಿ ಸೇರ್ಪಡೆ‘‘ದೇವರು ಮತ್ತು ಅಪಘಾತ” ಎಂಬ ಕಥೆ (2004)
4) ಚಲನಚಿತ್ರ :
1) ‘ಕರಿನಾಗರಗಳು ‘ ಎಂಬ ಸಣ್ಣಕಥೆ ‘‘ಹಸೀನಾ’’ಎಂಬ ಹೆಸರಿನ ಚಲನ ಚಿತ್ರವಾಗಿದ್ದು,ಗಿರೀಶ್ ಕಾಸರವಳ್ಳಿಯವರು ನಿರ್ದೇಶಕರು ಹಾಗೂ ತಾರಾರವರು ನಿರ್ಮಾಪಕಿಯಾಗಿದ್ದಾರೆ.ಮತ್ತು ಮೇಲ್ಕಂಡ ಚಿತ್ರಕ್ಕೆ 3 ರಾಷ್ಟ್ರ ಪ್ರಶಸ್ತಿಗಳು ದೊರಕಿವೆ.
6) ಅನುವಾದ :
1) ‘ಪರಕೀಯ ಕಥೆ‘ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡಮಿಯ ಪ್ರಕಟಣೆಯಾದ ಇಂದ್ರಪ್ರಸ್ಥ ಭಾರತೀಯಲ್ಲಿ ಪ್ರಕಟವಾಗಿದೆ.
2)“ಬೆಂಕಿ ಮಳೆ” ಕಥಾಸಂಕಲನದ ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು ದೇಶಾಭಿಮಾನಿ ಹಾಗೂ ಸ್ತ್ರೀ ಸಬದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕಥಾಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿದೆ.
3) ತಮಿಳು, ಪಂಜಾಬಿ, ಉರ್ದು, ಇಂಗ್ಲೀಷ್ ಭಾಷೆಗೆ ಅನೇಕ ಕಥೆಗಳು ಭಾಷಾಂತರಗೊಂಡಿವೆ
7) ಪ್ರಶಸ್ತಿ, ಪುರಸ್ಕಾರ ಮತ್ತು ಬಹುಮಾನ :
1) ‘ಒಮ್ಮೆ ಹೆಣ್ಣಾಗು ಪ್ರಭುವೆ’ ಪ್ರಜಾವಾಣಿಯಲ್ಲಿ ದಿನಾಂಕ: 30/11/97 ರಂದು ಪ್ರಕಟವಾದ ನನ್ನ ಸಣ್ಣ ಕಥೆಗೆ ಸಂಭಾಷಣೆ ಬರೆದಿದ್ದು, ಆಕಾಶವಾಣಿ ಬೆಂಗಳೂರು ವಾಣಿಜ್ಯಕೇಂದ್ರದವರ ಸಹಯೋಗದಿಂದ ನಿರ್ಮಿಸಿದ ಸದರಿ ರೇಡಿಯೋ ನಾಟಕಕ್ಕೆ 1999ರಇಂಟರ್ ನ್ಯಾಷನಲ್ ವಿಮೆನ್ ಫಾರ್ ರೇಡಿಯೋ ಅಂಡ್ ಟೆಲಿವಿಶನ್ ಬಹುಮಾನ ದೊರಕಿದೆ.
2) ನನ್ನ ಕವನ ‘ಅಮ್ಮನ ಸೀರೆ’ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು 1999ರ ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿವi ಉದಯೋನ್ಮಖ ಕವಯತ್ರಿ ಬಹುಮಾನ ಪಡೆದಿದೆ.
3) ನೆಲಮನೆ ಪ್ರಕಾಶನದಿಂದ ಎರಡನೆ ಕಥಾಸಂಕಲನ ‘ಬೆಂಕಿಮಳೆ’
ಪ್ರಕಟವಾಗಿದ್ದು, 2000ದ ಇಸವಿಯ ಕರ್ನಾಟಕ ಲೇಖಕಿಯರ
ಸಂಘದ ವತಿಯಿಂದ ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ದೊರಕಿದೆ.
4) ಕನಾಟಕ ಸಾಹಿತ್ಯ ಅಕಾಡೆಮಿವತಿಯಿಂದ 1999ನೇ ಸಾಲಿನ ಸಣ್ಣಕಥೆ ಪ್ರಕಾರದ
ಉತ್ತಮ ಕೃತಿಯೆಂದು ಪುಸ್ತಕ ಬಹುಮಾನ ದೊರಕಿದೆ.
5) 2002ನೇ ಕರ್ನಾಟಕ ರಾಜ್ಯ ಪ್ರಶಸ್ತಿ ಸಾಹಿತ್ಯಕ್ಕೆ ದೊರಕಿದೆ
6) ಕರ್ನಾಟಕ ಸಾಹಿತ್ಯ ಅಕಾಡೆಮಿಯ 2004ರ ಸಾಲಿನ ಗೌರವ ಪ್ರಶಸ್ತಿ ದೊರಕಿದೆ
7) ಬೆಂಕಿಮಳೆ ಕಥಾ ಸಂಕಲನಕ್ಕೆ ಇನ್ಫೋಸಿಸ್ ಸಾಹಿತ್ಯ ಪ್ರತಿಷ್ಠಾನದ 2002ರ ಸಾಲಿನ ಸುಧಾಮೂರ್ತಿ ಪ್ರಶಸ್ತಿ ದೊರಕಿದೆ
8)“ಶಾಶ್ವತೀ”ಯ ವತಿಯಿಂದ 2004ನೇ ವರ್ಷದ
“ಕರ್ನಾಟಕ ಕಲ್ಪವಲ್ಲಿ” ಪ್ರಶಸ್ತಿ ದೊರಕಿದೆ.
9) 2006ನೇ ಮಹಾಮಸ್ತಕಾಭಿಷೇಕದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದಪ್ರಶಸ್ತಿ ದೊರೆಕಿದೆ.
10) 2010ರ ಪದ್ಮಭೂಷಣ ಡಾ. ಬಿ. ಸರೋಜಾ ದೇವಿ ಪ್ರಶಸ್ತಿ ದೊರಕಿದೆ
11) ದಾವಣೆಗೆರೆಯ ಬಸವ ಕೇಂದ್ರದಿಂದ 2013ರ ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿ ದೊರಕಿದೆ.
12) ಮುಂಬೈ ಕರ್ನಾಟಕ ಸಂಘದ ವತಿಯಿಂದ 2014ರ ಡಾ|| ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ
13) ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ರವರ ಕಛೇರಿಯಿಂದ 2014ರ ಜೀವ ಮಾನದ ಸಾಧನೆ ಪ್ರಶಸ್ತಿ
14) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಯ್ಸಳ ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ ಪ್ರಶಸ್ತಿಯನ್ನು ನೀಡಿರುತ್ತಾರೆ.(2015)
8) ಅಧ್ಯಯನ:
1) “ಬಾನುಮುಷ್ತಾಕ್ ಅವರ ಸಣ್ಣಕಥೆಗಳು” ವಿಷಯದ ಮೇಲೆ ಶ್ರೀದೇವಿ ಎಸ್
ಪಾಟೀಲ್ ಎಂಬುವವರು ಡಾ|| ನಿಜಲಿಂಗಪ್ಪ ಮಟ್ಟಿಹಾಳರವರಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದು,ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿ ಎಂ.ಫಿಲ್.ಪದವಿ ಪಡೆದಿರುತ್ತಾರೆ.
2) 25ನೇ ಶತಮಾನದ ಕೊನೆಯ 25 ವರ್ಷಗಳ ಕಥನ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಸಾಂಸ್ಕøತಿಯ ಅನನ್ಯತೆಯ ನೆಲೆಗಳು ಎಂಬ ಮಹಾಪ್ರಬಂಧದಲ್ಲಿ ಡಾ|| ಸಬೀಹಾರವರ
ಮಾರ್ಗದರ್ಶನದಲ್ಲಿ ಸುಜಾತಾ. ಕೆ. ಎಂಬ ಸಂಶೋದಕಿಯು ಬಾನು ಮುಷ್ತಾಕ್ ಅವರ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಅನನ್ಯತೆಯ ನೆಲೆಗಳು ಎಂಬ ಭಾಗದ ತೌಲನಿಕ ಅಧ್ಯಯನ ಮಾಡಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿ ಪಡೆದಿರುತ್ತಾರೆ.
3) ಮುಂಬಯಿಯ SPಂಖಖಔW ಸಂಸ್ಥೆಯವರು ಪ್ರಕಟಿಸಿರುವ
ಊಔಖಿ IS ಖಿಊಇ ಒಔಔಓ ಎಂಬ ಗ್ರಂಥದಲ್ಲಿ ನನ್ನ ಬದುಕು-ಬರಹವನ್ನು
ದಾಖಲಿಸಿದ್ದಾರೆ.
4) ಮಂಗಳೂರು ವಿಶ್ವವಿದ್ಯಾನಿಲಯದ 2006ರ ಪದವಿ ತರಗತಿಯ ಪಠ್ಯ ಪುಸ್ತಕವಾದ
“ಕೊಡಚಾದ್ರಿ”ಯಲ್ಲಿ ನನ್ನ ಕಥೆ “ನಮ್ಮೊಳಗಿನ ಜರೀನಾ” ಸೇರ್ಪಡೆಯಾಗಿದೆ.
5) “ಒಮ್ಮೆ ಹೆಣ್ಣಾಗು ಪ್ರಭುವೆ” ಕಥೆಯು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಬಿ.ಎ.
ಪ್ರಥಮ ವರ್ಷದ ಕನ್ನಡ ಸಾಮಾನ್ಯ ಪಠ್ಯಪುಸ್ತಕ “ಕಥಾಸಂಗಮ”ದಲ್ಲಿ ಮತ್ತು
ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ.
6) ಬೆಂಗಳೂರು ವಿಶ್ವವಿದ್ಯಾಲದ ಪದವಿ ಪಠ್ಯಪುಸ್ತಕ ಸಾಹಿತ್ಯ -ಸಲ್ಲಾಪ-2ರಲ್ಲಿ
ದೇವರು ಮತ್ತು ಅಪಘಾತ ಕಥೆ ಸೇರ್ಪಡೆಯಾಗಿದೆ .
ಸಾಹಿತ್ಯಸೇವೆ (ಸಂಘ-ಸಂಸ್ಥೆಗಳಲ್ಲಿ)
: 1)1997ರಿಂದ98ರವರೆಗೆಕರ್ನಾಟಕ ಸಾಹಿತ್ಯ-ಅಕಾಡೆಮಿಯ ಸದಸ್ಯೆಯಾಗಿ
2) ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯೆಯಾಗಿ
3) ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ
ಸಮಿತಿಯ ಕಾರ್ಯಕಾರಿ ಸಮಿತಿಯ
ಸದಸ್ಯೆಯಾಗಿ
4) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ
ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿರುತ್ತೇನೆ
5) ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷೆಯಾಗಿ 2008ನೇ ಇಸವಿಯಲ್ಲಿ
ಆಯ್ಕೆಯಾಗಿರುತ್ತೇನೆ.
6) ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ
ನನ್ನ ಬದುಕು-ಸಾಧನೆಯ ಬಗ್ಗೆ
ಸಾಕ್ಷ್ಯಚಿತ್ರವೊಂದು ಚಿತ್ರೀಕರಣವಾಗಿದೆ.
7) 2-11-12ರಿಂದ 4-11-12ರವರೆಗೆ ದೆಹಲಿಯ
ಇಂಡಿಯಾ ಹ್ಯಾಬಿಟಾಟ್ ಸೆಂಟರಿನಲ್ಲಿ ನಡೆದ
ಸಮನ್ವಯ ಗ್ರೂಪಿನ ಭಾರತೀಯ ಭಾಷಾ
ಉತ್ಸವ ದಲ್ಲಿ ಭಾಗವಹಿಸಿರುತ್ತೇನೆ.
8) ದೂರದರ್ಶನ ಚಂದನದಲ್ಲಿ ನನ್ನ ಕೃತಿಗಳ
ಹಿನ್ನೆಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮ
ಪ್ರಸಾರಗೊಂಡಿದೆ.
9) 07/12/12ರಿಂದ 9/12/12ರವರೆಗೆ ನಡೆದ ಬೆಂಗಳೂರು ಲಿಟರೆರಿ ಫೆಸ್ಟಿವಲ್ನಲ್ಲಿ ಸಂವಾದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
ದಿನಾಂಕ: 11/12/2015 (ಬಾನು ಮುಷ್ತಾಕ್)
ಸ್ಥಳ : ಹಾಸನ. ವಕೀಲರು
No comments:
Post a Comment